ನಮ್ಮೂರ ಅಜ್ಜ

ನಮ್ಮೂರ ಕೇರಿಯ
ರಸ್ತೆಯ ಅಂಚಿನಲ್ಲಿ
ಕುಳಿತಿದ್ದಾನೆ ಕಾಲಗರ್ಭದ ಹಿರಿಯಜ್ಜ

ಅರವತ್ತು ವಸಂತಗಳ
ಅರಿವಿನ ಅಗಾಧ ಶಕ್ತಿಯ
ಬದುಕಲಿ ಬಳಲಿದ ಹಿರಿಜೀವ

ಮುದುಡಿದ ನೆರೆಗಳ ಮುಖದಿ
ಕಳೆದಿಹ ಬದುಕಿನ…
ಬಾಳಸಂಜೆಯ ಎದುರುನೋಡುತಿಹನು

ಬರಲಿರುವ ದಿನಗಳ
ಸಮಯವ ಕಾಯುತ
ಸಮೀಪದ ಹೆಜ್ಜೆಗಳ ಗುಣಿಸುತ್ತಿರುವನು

ಯಾರು ಕಾಯುವವರಿಲ್ಲ
ಮಾತನಾಡಿಸುವವರಿಲ್ಲ
ಕರೆದು ಕೇಳುವರಿಲ್ಲ

ಆದರೂ ನಮ್ಮಜ್ಜ ಬದುಕಿದ್ದಾನೆ
ಬದುಕುತ್ತಾ ಭವಿಷ್ಯ ಎದುರು ನೋಡುತ್ತಿದ್ದಾನೆ
ನಿಸರ್ಗದ ಮಡಿಲಲ್ಲಿ ಒಬ್ಬನೇ ಕುಳಿತು

ನೆನಪಾಗುತ್ತಿವೆ ಕಳೆದ ದಿನಗಳು
ಕಣ್ಣು ಮುಂದೆ ನಿಲ್ಲುತ್ತವೆ
ಬಾಲ್ಯ ಪ್ರಾಯದ ಹಗಲು-ರಾತ್ರಿಗಳು

ಕಳೆದಿರುವ ಬದುಕು
ದಿನವಿಡಿ ತಳ್ಳುತ್ತಿದೆ
ಒಣಗಿದ ಬೋಳು ಆಲದ ಮರದಂತೆ

***

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ ಸಾಹಿತ್ಯ : ಸ್ತ್ರೀಸಂವೇದನೆಯ ನೆಲೆಗಳು
Next post ಆತ್ಮ ಶೋಧನೆ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

cheap jordans|wholesale air max|wholesale jordans|wholesale jewelry|wholesale jerseys